ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು ಬೀಸುತ್ತ ಖಂಡಾಂತರಗೊಂಡು ಬೇರೆ ರಾಷ್ಟ್ರ, ರಾಜ್ಯದ ಜೀವರಾಶಿಗಳಿಗೂ ಆಪತ್ತು ತರಬಲ್ಲದು.

ಸಾಮಾನ್ಯವಾಗಿ ಉಷ್ಣವಲಯದ ನಾಡುಗಳಲ್ಲಿ ಭಾರತವು ಸೇರಿ ಬಳಸುವ ಭಾರಿ ಮಟ್ಟದ ಕೀಟನಾಶಕಗಳು ಗಾಳಿಯೊಡನೆ ಲೀನವಾಗಿ, ಗಾಳಿಯನ್ನು ವಿಷಗೊಳಿಸಿ ಉತ್ತರ ಧೃವ ಪ್ರದೇಶವನ್ನು ಸೇರಿ ನೀರಿನಲ್ಲಿ ಬೆರೆಯುತ್ತವೆ. ಇಂಥಹ ಪರಿಸರದಲ್ಲಿರುವ ಜೀವಿಗಳು ನೀರು, ಮತ್ತು ಗಾಳಿಯ ಸೇವನೆಯಿಂದ ವೇದನೆಯನ್ನು ಪಡಬೇಕಿದೆ. ಕೆನಡಾದ ಉತ್ತರ ಬದಿಯ ಯುಕೋನೀಯ ಲೇಬರ್ಸ್ ಸರೋವರದಲ್ಲಿ ಕೀಟನಾಶಕ ಮತ್ತು ವಿಷದ ಅಂಶ ಸೇರಿ ಕಳವಳಕಾರಿ ಮಟ್ಟವನ್ನು ತಲುಪಿದೆ, ಎಂದು ಇತ್ತೀಚೆಗೆ ಪತ್ತೆಮಾಡಲಾಗಿದೆ. ಈ ಪ್ರದೇಶದಲ್ಲಿ ಕೀಟನಾಶಕ ಅಂಶವನ್ನು ಹಾಕದಿದ್ದರೂ ಆಫ್ರಿಕಾ, ಭಾರತದಂತಹ ದೇಶಗಳ ಕಡೆಯಿಂದ ಉತ್ತರ ಧೃವದತ್ತ ಬೀಸಿದ ಗಾಳಿಯೊಂದಿಗೆ ಸೇರಿಕೊಂಡು ಇಲ್ಲಿ ತನ್ನ ಪರಿಣಾಮವನ್ನು ಬೀರುತ್ತಲಿದೆ.

ಕೆನಡಾದ ಸಂಶೋಧಕರು ಉತ್ತರ ಧೃವ ಪ್ರದೇಶದ ಕಡಲ ನೀರಿನ ಮೇಲ್ಮಟ್ಟದಲಿ ವಿಷಕೀಟನಾಶಕದಂತಹ ಅಂಶಗಳಿರುವುದನ್ನು ಕಂಡು ದಂಗಾಗಿದ್ದಾರೆ. ಈ ಸರೋವರ ಮತ್ತು ಧೃವ ದ ಸುತ್ತ ಮನುಷ್ಯನನ್ನೊಳಗೊಂಡು ೨೦೦ ರಷ್ಟು ಬೇರೆಬೇರೆ ಜೀವರಾಶಿಗಳಿವೆ. ಇಲ್ಲಿಯ ಜೀವರಾಶಿಗಳ ಆಹಾರ ಮೀನು ನೀರು ಮತ್ತು ಮೀನು ಆಹಾರದ ಮೂಲಕ ಈ ಕೀಟನಾಶಕದ ನಂಜು ಸುತ್ತಲ ಪ್ರದೇಶ ಮತ್ತು ಗಾಳಿಬೀಸಿದ ಪ್ರದೇಶಗಳೆಲ್ಲೆಡೆಯಲ್ಲಿ ವಿಷ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವುದಂತೂ ನಿಜ. ಕೀಟನಾಶಕಗಳಿಂದ ಸಸ್ಯಗಳಿಗೆ ಉಪಕಾರವಾಗಬಹುದೆಂದರೂ ಕೊನೆಗೊಂದು ದಿನ ಆ ಸಸ್ಯವು ಸೇರಿ ಜನ ಸಮುದಾಯಕ್ಕೆ ವಿಷ ಹರಡುತ್ತದೆಂಬುದಂತೂ ಸತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರ ಭದ್ರತೆಗೆ ಇರಬೇಕಲ್ಲ ಕೊಡಪಾನ ?
Next post ಗುರಿ ಇರಬೇಕು ಬಾಳಿಗೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys